Advt. 
 Views   834
Mar 14 2022 5:06PM

ಆರನೇ ಕ್ಲಾಸ್ ಓದುವಾಗ ಬೆಟ್ಟದ ಹೂ ನೋಡಿದ್ದೆ


(ಕೊಪ್ಪಳದ ಪಟಾಕಿ ಬಸು ಕಿರುಚಿತ್ರಗಳ ನಿರ್ದೇಶಕರು, ಯುಟೂಬರ್ ಕೂಡ ಹೌದು. ಪುನೀತ್ ರಾಜಕುಮಾರವರ ಬಗ್ಗೆ ಅಪಾರ  ಪ್ರೀತಿ ಅಭಿಮಾನದ ಬಸು ಅವರ ಬಗ್ಗೆ ಮಾತನಾಡಿದ್ದಾರೆ)

ನಾನು ಇಷ್ಟಪಡುವ ನಟರಲ್ಲಿ  ಕಮಲಹಾಸನ್ ಹಾಗೂ ಪುನೀತ್ ರವರು. ಅವರ ಬೆಟ್ಟದ ಹೂ ಸಿನಿಮಾದಿಂದ ಇಷ್ಟ ಆದರು.  ಆಗ ಬಹುಶಃ ನಾನು ಆರನೇ ಕ್ಲಾಸ್ ಓದುತ್ತಿದ್ದೆ. ನಮ್ಮ ತಂದೆ ಕರೆದುಕೊಂಡು ಹೋಗಿದ್ರು ಗಂಗಾವತಿಯಲ್ಲಿ. ಟಾಕೀಸ್ ಯಾವುದು ಅಂತ ಸರಿಯಾಗಿ ನೆನಪಿಲ್ಲ. ಅಲ್ಲಿ ಬೆಟ್ಟದ ಹೂ ಸಿನಿಮಾ ನೋಡಿದ್ದೆ.

ರೇಡಿಯೋದಲ್ಲಿ ಆ ಹಾಡು ಬರುತ್ತಿತ್ತು. 'ತಾಯಿ ಶಾರದೆ ಲೋಕಪೂಜಿತೆ....ಅದನ್ನು ನಾವು ಕೇಳಿ ಕೇಳಿ ಪುನೀತ್ ರವರನ್ನು ಇನ್ನಷ್ಟು ಇಷ್ಡಪಡೋಕೆ ಆರಂಭಿಸಿದೇವೆನೋ  ಅನಿಸುತ್ತೆ. ಪುನೀತ್ ರವರ ಸಿನಿಮಾಗಳಲ್ಲಿ ಯಾವುದೇ ರೀತಿಯ ಅಭಾಸಗಳ್ತಿರಲಿಲ್ಲ. ಪ್ರತಿಯೊಬ್ರು ಫ್ಯಾಮಿಲಿ ಜೊತೆ ನೋಡುವಂಥ ಸಿನಿಮಾ ಮಾಡುವುದರಲ್ಲಿ ಕನ್ನಡದಲ್ಲಿ ಮೊದಲಿಗರು ಅಣ್ಣಾವ್ರು. ನಂತರ ಇವರೆ (ಅಪ್ಪು) . ಸಿನಿಮಾದಲ್ಲಿ ಕೆಟ್ಟ ಹವ್ಯಾಸಗಳ ದೃಶ್ಯ ಇರುತ್ತಿರಲಿಲ್ಲ. ಕಮರ್ಷಿಯಲ್ ಆಗಿ ಹಾಡುಗಳಿದ್ರೂ ಅಶ್ಲಿಲತೆ ಇರುತ್ತಿರಲಿಲ್ಲ ಅವರ ಸಿನಿಮಾಗಳಲ್ಲಿ.

ಅವರ ಸಿನಿಮಾಗಳಲ್ಲಿ ಅತಿ ಹೆಚ್ಚು ಇಷ್ಟಪಟ್ಟಿದ್ದು ಅರಸು ಸಿನಿಮಾ. ಆ ಸಿನಿಮಾದಲ್ಲಿ ದುಡ್ಡಿನ ಮಹತ್ವದ ಬಗ್ಗೆ , ಮನುಷ್ಯರಿಗೆ ಇರೋ ದುಡ್ಡಿನ ವ್ಯಾಮೋಹದ ಬಗ್ಗೆ , ದುಡಿಮೆಯ ಬಗ್ಗೆ ಬಹಳ ಚೆನ್ನಾಗಿ ತೋರಿಸಿದ್ದಾರೆ.

ಆಕಾಶ ಸಿನಿಮಾದಲ್ಲಿ ಒಂದು ದೃಶ್ಯ ಬರುತ್ತೆ. ಯುವಕ ಲವ್ ಫೆಲ್ಯೂರ್ ಆಗಿ ಸೂಸೈಡ್ ಮಾಡಿಕೊಳ್ಳೊಕೆ ಹೋಗ್ತಾನೆ. ಆತನನ್ನು ತಡೆದು ಯಾವುದೇ ಒಂದು ಉದ್ಯೋಗ ಮಾಡು. ಉದ್ಯೋಗದಲ್ಲಿ ಸಣ್ಣದು ದೊಡ್ಡದು ಅಂತ ಇರಲ್ಲ. ಎನೇ ಮಾಡಿದರೂ ಚೊಕ್ಕಟವಾಗಿ ಮಾಡು ಅಂದಾಗ ಆ ಯುವಕ ಉಪ್ಪಿನಕಾಯಿ ವ್ಯಾಪಾರ ಆರಂಭಿಸುತ್ತಾನೆ. ಚೆನ್ನಾಗಿ ದುಡಿತಾನೆ. ಸ್ವಲ್ಪ ದಿನ ಆದ ಮೇಲೆ ಅವನು ಬಂದಾಗ ಇವರು ಗುರುತು ಹಿಡಿಯಲ್ಲ. ಯುವಕ ಗುರುತು ಹಿಡಿದು ಮಾತನಾಡಿಸಿ ತನ್ನ ತಾಯಿ ಪರಿಚಯಿಸ್ತಾನೆ. ಆ ದೃಶ್ಯ ನೋಡಿ ಬದುಕು ಕಟ್ಟಿಕೊಂಡವರು ಇದ್ದಾರೆ.

ಒರ್ವ ಆದರ್ಶ ವ್ಯಕ್ತಿ ನಟರಾಗಿ ಸಿನಿಮಾದಲ್ಲಿ ನಟಿಸುವಾಗ ಮನರಂಜನೆ ಜೊತೆ ಆದರ್ಶವನ್ನೂ ಹೇಳಬಹುದು ಅಂತ ಸಾಬೀತು ಪಡಿಸಿದ್ದಾರೆ ಅಪ್ಪು. ಪರಭಾಷಾ ಸಿನಿಮಾಗಳಿಗೆ ಸೆಡ್ಡು ಹೊಡೆಯುವಂತೆ ಕನ್ನಡ ಸಿನಿಮಾ ಮಾಡ್ತಾ ಇದ್ರು. ಹಾಡು, ಡ್ಯಾನ್ಸ್ , ಫೈಟ್- ಮೇಕಿಂಗ್ ನಲ್ಲಿಯೂ. ಪರಭಾಷಾ ನಟರೂ ಮೆಚ್ಚುವ  ನಟ ಅಂದ್ರೆ ಪುನೀತ್ ರಾಜಕುಮಾರರವರು.

ದಕ್ಷಿಣ ಭಾರತದ ಭಾಷೆಗಳ ಸಿನಿಮಾಗಳು ಮೀರುವಂತೆ ಸಿನಿಮಾ ಮಾಡಬೇಕಂದ್ರೆ ಪ್ರತಿಯೊಂದರಲ್ಲಿ ಪರ್ಫೆಕ್ಟ್ ಆಗಿರಬೇಕು. ಹಾಗೇ ಪೂರ್ವ ತಯಾರಿ ಇಲ್ಲದೆ ಒಂದು ದೃಶ್ಯವನ್ನೂ ಮಾಡುತ್ತಿರಲಿಲ್ಲ ಅವರು.

ಕನ್ನಡದ ಎಲ್ಲ ನಟರ ಅಭಿಮಾನಿಗಳು ಪುನೀತ್ ರಾಜಕುಮಾರರವರ ಸಿನಿಮಾ ನೋಡ್ತಾ ಇದ್ರು ಅದನ್ನ ನಾನು ಕಣ್ಣಾರೆ ಕಂಡಿದ್ದೇನೆ. ಅವರು ಅಂದ್ರೆ ಎಲ್ಲರಿಗೂ ಪ್ರೀತಿ ಇಷ್ಟ.

ಶೂಟಿಂಗ್ ನಲ್ಲಿ ಎಲ್ಲರನ್ನೂ ಪ್ರೀತಿಯಿಂದ ಕಾಣ್ತಾ ಇದ್ರು. ಅವರ ಕಷ್ಟ ಅರಿತು ಸಹಾಯ ಮಾಡುತ್ತಿದ್ರು. ಅವರು ಮಾಡಿದ ಸಹಾಯ ಎಷ್ಟು ಹೇಳಿದ್ರು ಕಡಿಮೆ.

ಅವರ ನೆನಪುಗಳೊಂದಿಗೆ ಅವರ ಆದರ್ಶ ಪಾಲನೆ ಮಾಡ್ತಾ ಹೋಗೋಣ.



Share this news

 Comments   1

Post your Comment

PEOPLE'S OPINION


Nandita   Mar 14 2022 9:16PM


ಹೊಸ ಸುದ್ದಿಗಳು


May 2 2024 7:59PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಜಿಲ್ಲಾಧಿಕಾರಿಗಳ ಪ್ರಕಟಣೆ
Apr 28 2024 8:45PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ತಂದೆ ಮಗ ಒಂದೇ ದಿನ ನಿಧನ
Apr 28 2024 8:14PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಸಂವಿಧಾನ ಪೀಠಿಕೆ ಓದುವುದರ ಮೂಲಕ ಮಾಂಗಲ್ಯಧಾರಣೆ
Apr 28 2024 7:39PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಾಂಗ್ರೆಸ್ ಸರಕಾರದ ಗ್ಯಾರಂಟಿಗಳು ಸಕ್ಸಸಫುಲ್ : ರಡ್ಡಿ ಶ್ರೀನಿವಾಸ
Apr 27 2024 7:25PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಗುಳದಳ್ಳಿಯಲ್ಲಿ ಸಾಮೂಹಿಕ ವಿವಾಹಗಳು
Apr 27 2024 9:38AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕುಷ್ಟಗಿ : ಭ್ರಷ್ಟಾಚಾರ ರಹಿತ ಆಡಳಿತ ನೀಡಿದ ಪಕ್ಷ ಬಿಜೆಪಿ
Apr 26 2024 9:11PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಮದುವೆಯಲ್ಲಿ ಮತದಾನ ಜಾಗೃತಿ
Apr 26 2024 7:08AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ
Apr 25 2024 12:06PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಮತದಾನಕ್ಕೆ ಮುನ್ನ ಅಜ್ಜಿ ನಿಧನ
Apr 25 2024 8:46AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಚಿನ್ಹೆಗಳು





     
Copyright © 2021 Agni Divya News. All Rights Reserved.
Designed & Developed by We Make Digitize