ಕೊಪ್ಪಳ : ಇದು ಕೊಪ್ಪಳ ತಾಲೂಕಿನ ಬಿಸರಳ್ಳಿ ಮೂಲದ ಇಬ್ಬರು ಬಾಲಪ್ರತಿಭೆಗಳು ನಟಿಸಿದ ಸಿನಿಮಾ. ತಂದೆ ತಾಯಿ ಮಕ್ಕಳೊಂದಿಗೆ ನೋಡಬೇಕಾದ ಮಕ್ಕಳ ಸಿನಿಮಾ. ರವಿಚಂದ್ರನ್ ಹಿರೋಯಿನ್ ಅಪೂರ್ವ ನಿರ್ದೇಶಿಸಿದ ಸಿನಿಮಾ. ಬೆಂಗಳೂರು ಅಂತರ ರಾಷ್ಟ್ರೀಯ ಫಿಲಂ ಫೆಸ್ಟಿವಲ್ ನಲ್ಲಿ ಪ್ರಥಮ ಬಹುಮಾನ ಮತ್ತು ಅಪ್ಪು ಚಲನಚಿತ್ರೋತ್ಸವದಲ್ಲಿ ಉತ್ತಮ ನಿರ್ದೇಶಕ ಪ್ರಶಸ್ತಿ ಪಡೆದ ಸಿನಿಮಾ.
ಇದುವೇ ' ಓ ನನ್ನ ಚೇತನ ' ಸಿನಿಮಾ !
ಇದೇ ಡಿ. 15 ರಂದು ರಾಜ್ಯಾದ್ಯಂತ ಮತ್ತು ಕೊಪ್ಪಳದ ಲಕ್ಷ್ಮೀ ಚಿತ್ರಮಂದಿರದಲ್ಲಿ ಬಿಡುಗಡೆ ಆಗುತ್ತಿದೆ. ಮೊಬೈಲ್ ಗೀಳಿಗೆ ಬಿದ್ದ ಮಕ್ಕಳ ಕಥಾ ಹಂದರದ ಸಿನಿಮಾ ಇದು.
ಬಿಸರಳ್ಳಿ ಮೂಲದ ಮಂಜುನಾಥ ಕೊಪ್ಪದ ಅವರ ಪುತ್ರ 7 ನೇ ತರಗತಿ ವಿದ್ಯಾರ್ಥಿ ಪ್ರತೀಕ್, ಇತನ ಅಣ್ಣ ಪ್ರಥಮ ಪಿಯುಸಿ ಓದುತ್ತಿರುವ ಪ್ರತೀಕ್ ನಟಿಸಿರುವ ಸಿನಿಮಾ ಇದು.
ಪ್ರತೀಕ್ ಓ ನನ್ನ ಚೇತನ, ರಣಾಗ್ರ , ದರ್ಶನ ನಟನೆಯ ತಾರಕ್, ಜೂನಿ ಸಿನಿಮಾದಲ್ಲಿ ನಟಿಸಿದ್ದಾನೆ.
ಪ್ರೀತಮ್ ಓ ನನ್ನ ಚೇತನ, ನಮ್ಮವರು, ಮಿಂಚು ಹುಳು, ಅಗನ್, ಐರಾವನ್ ಸಿನಿಮಾದಲ್ಲಿ ಹಾಗೂ ಅದಕ್ಕೂ ಮೊದಲು ಡ್ರಾಮಾ ಜೂನಿಯರ್ಸ್, ಅಗ್ನಿಸಾಕ್ಷಿ, ಗಿರಿಜಾ ಕಲ್ಯಾಣ ಧಾರಾವಾಹಿ ಹಾಗೂ ಕೆಲ ಕಿರುಚಿತ್ರಗಳಲ್ಲಿ ನಟಿಸಿದ್ದಾನೆ.
ರವಿಚಂದ್ರನ್ ಅವರು ಬಹಳ ವರ್ಷಗಳ ಕಾಲ ಶ್ರಮ ಹಾಕಿ ಮಾಡಿದ್ದ 'ಅಪೂರ್ವ ' ಸಿನಿಮಾದ ನಾಯಕಿ ಅಪೂರ್ವ ಈ ' ಓ ನನ್ನ ಚೇತನ' ಸಿನಿಮಾ ನಿರ್ದೇಶಕಿ.
ಮೊನ್ನೆ ಸೋಮವಾರ ಬೆಂಗಳೂರಿನಲ್ಲಿ ಓ ನನ್ನ ಚೇತನ ಸಿನಿಮಾ ಟ್ರೇಲರ್ ರವಿಚಂದ್ರನ್ ಬಿಡುಗಡೆಗೊಳಿಸಿದ್ದಾರೆ.
------------
ಬುಧವಾರ ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಈ ಸಿನಿಮಾದ ಪೋಸ್ಟರ್ ಬಿಡುಗಡೆಗೊಳಿಸಿದ ಚಲನಚಿತ್ರ ಸಾಹಿತಿ ಡಾ. ಮಹಾಂತೇಶ ಮಲ್ಲನಗೌಡರ, ನಿರ್ದೇಶಕ ಬಸವರಾಜ ಕೊಪ್ಪಳ, ಪ್ರತೀಕ್, ಪ್ರೀತಮ್ ಹಾಗೂ ಬಿಸರಳ್ಳಿ ಗ್ರಾ.ಪಂ ಅಧ್ಯಕ್ಷ ರವೀಂದ್ರಗೌಡ ಮಾಲಿಪಾಟೀಲ್ , ಮಂಜುನಾಥ ಅಂಗಡಿ, ಸುಧಾಕರ ಮುಜಗೊಂಡ ಇತರರು ನಮ್ಮ ಪ್ರತಿಭೆಗಳ ಈ ಸಿನಿಮಾ ಬೆಂಬಲಿಸುವಂತೆ ಮನವಿ ಮಾಡಿದರು.