ಮರದ ವೇದನೆ
ಮರವು ನಾನು ಕೇಳು ನರ ಮಾನವ
ನನ್ನ ಕಡಿಯ ಬೇಡ ನೀನು
ನೀಡುವೆನು ನಿನಗೆ ಉಸಿರ ಗಾಳಿ
ನೆರಳು ಹೂ ಹಣ್ಣು ಫಲವನ್ನೆಲ್ಲಾ
ನಾನು ಉಳಿದರೆ ತಾನೇ ನೀ ಉಸಿರಾಡುವುದು
ನಾನು ಬೆಳೆದರೆ ಭೂವಿಗೆ ಮಳೆಯಾಗುವುದು
ತಿಳಿಯದೇ ನಿನಗೆ ಇನ್ನೂ
ನನ್ನ ಅಳಿವು ನಿನ್ನ ಅಳಿವು
ಸಕಲ ಜೀವಿಗಳಿಗೆ ಉಸಿರನೀಯುವೆ ನಾನು
ನನ್ನಿಂದಲ್ಲೇ ಎಲ್ಲಾ ಎನ್ನುವ ಮೂಡ ಮನುಜ
ನೀನೆ ನನ್ನ ವಿನಾಶಕನಾದರೆ ಹೇಗೆ ?
ನಿನ್ನ ಜೀವದ ಉಸಿರು ನಾನಾಗಿರುವಾಗ.
- ರಾಜೇಸಾಬ ಕೆ. ರಾಟಿ