ಕೊಪ್ಪಳ : ಕೆಲ ದಿನಗಳ ಹಿಂದೆ ಮುದ್ದಾಬಳ್ಳಿ ಕುಟುಂಬ ಹಾಗೂ ಹಲ ಕುಟುಂಬಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ಜೊತೆ ಸೇರಿ ಭ್ರಷ್ಟಾಚಾರ ಮಾಡಿದ್ದಾರೆಂದು ಬಾಷಾ ಹಿರೇಮನಿ ಇತರರು ಮಾಡಿರುವ ಆರೋಪ ಸುಳ್ಳು ಎಂದು ಗಂಗಾವತಿಯ ಕಲಾವಿದ ಕೆ. ಎಫ್. ಮುದ್ದಾಬಳ್ಳಿ ಹೇಳಿದರು.
ಸೋಮವಾರ ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಮಾತನಾಡಿದ ಅವರು ಎಂಟ್ಹತ್ತು ಕಲಾವಿದರು ಇರುವ ನಮ್ಮ ಕುಟುಂಬಗಳು ಬೇರೆ ಕಡೆ ವಾಸಿಸುತ್ತಿದ್ದೇವೆ. ಹಾಗಾಗಿ ಒಂದೇ ಕುಟುಂಬದ ವರಿಗೆ ಅವಕಾಶ ನೀಡಲಾಗಿದೆ ಎಂಬುದು ಸುಳ್ಳು.
ನಮ್ಮ ಕುಟುಂಬದವರು ಸಂಗೀತದಲ್ಲಿ ಸಾಧನೆ ಮಾಡಿದ್ದೇವೆ ನಮ್ಮ ವಿರುದ್ದ ಸುಳ್ಳು ಆರೋಪ ಮಾಡಿದ್ದಾರೆ. ಈ ಬಗ್ಗೆ ತನಿಖೆ ಆಗಲಿ ತಪ್ಪಿತಸ್ಥರನ್ನು ಕಪ್ಪು ಪಟ್ಟಿಗೆ ಸೇರಿಸಿ ಕ್ರಮ ಜರುಗಿಸಲಿ.
ನಮ್ಮ ಮತ್ತು ಕುಟುಂಬದ ವಿರುದ್ದ ಮಾಡಿರುವ ಭ್ರಷ್ಟಾಚಾರದ ಸುಳ್ಳು ಆರೋಪ ಬಾಷಾ ಹಿರೇಮನಿ, ರಾಮಚಂದ್ರಪ್ಪ ಉಪ್ಪಾರ, ನಾಗರಾಜ ಶ್ಯಾವಿ, ಅಲ್ಲಾಬಕ್ಷಿ ವಾಲಿಕಾರ ಇವರು 15 ದಿನದಲ್ಲಿ ಸಾಬೀತು ಪಡಿಸಬೇಕು ಅಥವಾ ಹೇಳಿಕೆ ಹಿಂಪಡೆಯಬೇಕು. ಇಲ್ಲವಾದರೆ ಕಾನೂನಾತ್ಮಕ ಹೋರಾಟ ಅನಿವಾರ್ಯ ಎಂದು ಕೆ. ಎಫ್ . ಮುದ್ದಾಬಳ್ಳಿ ಹೇಳಿದರು.
ಈ ಸಂದರ್ಭದಲ್ಲಿ ವಕೀಲರು ಹವ್ಯಾಸಿ ಕಲಾವಿದ ಜಲೀಲ್ ಪಾಷಾ ಮುದ್ದಾಬಳ್ಳಿ ಉಪಸ್ಥಿತರಿದ್ದರು.