ಕೊಪ್ಪಳ : ಪ್ರತೀ ವರ್ಷದಂತೆ 2024 ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿಗೆ ಕಾವ್ಯದ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ.
ಕನಿಷ್ಟ 35 ಕವಿತೆಗಳಿರುವ, ಈ ಮುಂಚೆ ಪುಸ್ತಕ ರೂಪದಲ್ಲಿ ಪ್ರಕಟವಾಗಿರದ, ಅನುವಾದಿತ ಅಲ್ಲದ ಕವಿತೆಗಳ ಹಸ್ತಪ್ರತಿಯನ್ನು ದಿ. 25.4.2024 ರ ಒಳಗೆ ಮಹೇಶ ಬಳ್ಳಾರಿ, ಅತ್ತಾರ ಗಲ್ಲಿ, ಜವಾಹರ ರಸ್ತೆ, ಕೊಪ್ಪಳ ಈ ವಿಳಾಸಕ್ಕೆ ಕಳುಹಿಸಬೇಕು ಎಂದು ಗವಿಸಿದ್ಧ ಎನ್. ಬಳ್ಳಾರಿ ವೇದಿಕೆ ಮತ್ತು ತಳಮಳ ಪ್ರಕಾಶನದ ಮಹೇಶ ಬಳ್ಳಾರಿ ತಿಳಿಸಿದ್ದಾರೆ.
ಮೊದಲ ಎರಡು ಸ್ಥಾನ ಗಳಿಸಿದ ಹಸ್ತಪ್ರತಿಗಳಿಗೆ ತಲಾ 6,000 ರೂ. ನಗದು ಮತ್ತು ಪ್ರಶಸ್ತಿ ಫಲಕ ವಿತರಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ
ಮಹೇಶ ಬಳ್ಳಾರಿ : ಮೊ. 9008996624
ರಮೇಶ ಸಿ. ಬನ್ನಿಕೊಪ್ಪ : ಮೊ. 9902746235
ಇವರನ್ನು ಸಂಪರ್ಕಿಸಬಹುದು.