ಕೊಪ್ಪಳ : ಕುಡುಕ ಗಂಡ ಮಲಗಿದ ಪತ್ನಿಗೆ ಕಲ್ಲು ಎತ್ತಿ ಹಾಕಿ ತಾನೂ ನೇಣಿಗೆ ಶರಣಾದ ಘಟನೆ ತಾಲೂಕಿನ ಬುಡಶೆಟ್ನಾಳ ಗ್ರಾಮದಲ್ಲಿ ಜರುಗಿದೆ.
ಘಟನೆ ಬುಧವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ನಡೆದಿದೆ.
ನಿಂಗಪ್ಪ ವಾಲಿಕಾರ (45) ಎಂಬಾತನೆ ಪತ್ನಿ ಲಕ್ಷ್ಮವ್ವ (40)ಳನ್ನು ಕೊಂದು ನೇಣು ಹಾಕಿಕೊಂಡಾತ.
ಬೆಳಗಿನ 3 ಗಂಟೆ ಸುಮಾರಿಗೆ ಮಲಗಿದ್ದ ಪತ್ನಿ ಮೇಲೆ ಕಲ್ಲು ಹಾಕಿದ್ದು ಮಗಳು ಎಚ್ಚರಗೊಂಡು ಚೀರಿಕೊಂಡಾಗ ಅಕ್ಕಪಕ್ಕದವರು ಸೇರಿದ್ದಾರೆ.
ಆಗ ಅಲ್ಲಿಂದ ಕಾಲ್ಕಿತ್ತ ನಿಂಗಪ್ಪ ಊರ ಹೊರಗಿನ ಗಿಡಕ್ಕೆ ಲುಂಗಿಯಿಂದ ನೇಣು ಹಾಕಿಕೊಂಡಿದ್ದಾನೆ. ಇತ್ತ ಅರೆ ಜೀವವಾಗಿದ್ದ ಲಕ್ಷ್ಮವ್ವಳನ್ನು ಗ್ರಾಮಸ್ಥರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿ ಆಗದೆ ಬೆಳಗಿನ ನಾಲ್ಕೂವರೆ ಸುಮಾರಿಗೆ ಜೀವ ಬಿಟ್ಟಿದ್ದಾಳೆ.