ಕೊಪ್ಪಳ ಲೋಕಸಭಾ ಚುನಾವಣೆಗೆ ಅಧಿಸೂಚನೆ ಆರಂಭವಾದ ಎಪ್ರಿಲ್ 12 ಶುಕ್ರವಾರ ಮೊದಲ ದಿನವೇ ನಾಲ್ವರು ಅಭ್ಯರ್ಥಿಗಳು ಸೇರಿದಂತೆ ಏಳು ನಾಮಪತ್ರ ಸಲ್ಲಿಕೆ ಆಗಿವೆ.
ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ ಎರಡು, SUCI ಕಮ್ಯೂನಿಸ್ಟ್ ಪಕ್ಷದ ಶರಣು ಗಡ್ಡಿ ಎರಡು, ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಎರಡು, ಪಕ್ಷೇತರ ಅಭ್ಯರ್ಥಿ ಮೆಹಬೂಬಸಾಬ ಒಂದು ನಾಮಪತ್ರ ಸಲ್ಲಿಸಿದರು.
ಕಮ್ಯೂನಿಸ್ಟ್ ಪಕ್ಷದ ಅಭ್ಯರ್ಥಿ ಶರಣು ಗಡ್ಡಿ ಲೇಬರ್ ಸರ್ಕಲ್ ನಿಂದ ಬೆಂಬಲಿಗರ ಜೊತೆ ಪಾದಯಾತ್ರೆಯ ಮೆರವಣಿಗೆ ಬಸವೇಶ್ವರ ವೃತ್ತದವರೆಗೆ ನಡೆಸಿ ನಂತರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಅವರ ಜೊತೆ ಶಾಸಕ ದೊಡ್ಡನಗೌಡ ಪಾಟೀಲ್, MLC ಹೇಮಲತಾ ನಾಯಕ, ಮಾಜಿ ಶಾಸಕರಾದ ಬಸವರಾಜ ದಡೇಸೂಗುರು, ಜೆಡಿಎಸ್ ರಾಜ್ಯ ಕಾರ್ಯದರ್ಶಿ ವೀರೇಶ ಮಹಾಂತಯ್ಯನಮಠ ಇತರರು ಸಾಥ್ ನೀಡಿದರು.