ಕೊಪ್ಪಳ : ಬಿಜೆಪಿ ಟಿಕೆಟ್ ತಪ್ಪಿರುವ ಸಂಸದ ಸಂಗಣ್ಣ ಕರಡಿ ಪಕ್ಷಾಂತರಕ್ಕೆ ರೆಡಿ ಆಗಿರುವ ಖಚಿತ ಮಾಹಿತಿ ಬರುತ್ತಿದೆ.
ಸೋಮವಾರ ಸಂಜೆ ಸಂಗಣ್ಣ ಕರಡಿ ನಿವಾಸಕ್ಕೆ ಕಾಂಗ್ರೆಸ್ ನ ಲಕ್ಷ್ಮಣ ಸವದಿ ಬಂದು ತಾಸಿಗೂ ಹೆಚ್ಚು ಕಾಲ ಗುಪ್ತ ಚರ್ಚೆ ನಡೆಸಿದ್ದರು.
ಚರ್ಚೆ ನಂತರ ಹೊರ ಬಂದ ಲಕ್ಷ್ಮಣ ಸವದಿ ಇಲ್ಲಿ ಟಿ ಕುಡಿಯೋಕೆ ಬಂದಿದ್ದೆ ಇದು ಸೌಹಾರ್ದ ಭೇಟಿ ಅಂದಿದ್ದರು.
ಲಕ್ಷ್ಮಣ ಸವದಿ ನಿರ್ಗಮನ ನಂತರ ಖಾಸಗಿ ಶಾಲೆ ಮಾಲಿಕರ ಕಾರಿನಲ್ಲಿ ತೆರಳಿದ ಸಂಗಣ್ಣ ಕರಡಿ ಶಾಲಾ ಮಾಲಿಕರ ಗೆಸ್ಟ್ ಹೌಸ್ ನಲ್ಲಿ ಸೋಮವಾರ ರಾತ್ರಿ ಡಿ.ಕೆ.ಶಿವಕುಮಾರ ಅವರ ಜೊತೆ ಫೋನ್ ಮೂಲಕ ಮಾತನಾಡಿದ್ದು ಆಗ ಕರಡಿ ಕಾಂಗ್ರೆಸ್ ಸೇರುವುದು ಪಕ್ಕಾ ಆಗಿದೆ ಎಂಬ ಮಾಹಿತಿ ಬಂದಿದೆ.
ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ನಾಮಪತ್ರ ಸಲ್ಲಿಕೆಯ ಒಂದೆರೆಡು ಗಂಟೆ ಮುಂಚೆ ಸಂಗಣ್ಣ ಕರಡಿ ಮನೆಗೆ ಆಗಮಿಸಿದ್ದು ಕರಡಿ ಕಾಂಗ್ರೆಸ್ ಸೇರ್ಪಡೆ ಖಚಿತ ಎನ್ನಲಾಗುತ್ತಿದೆ.
ಬುಧವಾರ ಸಂಸದ ಸ್ಥಾನಕ್ಕೆ ಹಾಗೂ ಬಿಜೆಪಿಗೆ ರಾಜೀನಾಮೆ ಸಲ್ಲಿಸಲಿದ್ದಾರೆ ಎನ್ನಲಾಗುತ್ತಿದೆ.