ಕೊಪ್ಪಳ : ಜಿಲ್ಲೆಯ ಎರಡು ಕಡೆ ಕರಡಿ ದಾಳಿ ನಡೆದಿದ್ದು ಓರ್ವ ವೃದ್ದ ಮೃತಪಟ್ಟು ಮೂವರು ಗಾಯಗೊಂಡ ಘಟನೆ ಜರುಗಿದೆ.
ಕೊಪ್ಪಳ ತಾಲ್ಲೂಕಿನ ನಾಗೇಶನಹಳ್ಳಿ ಹತ್ತಿರ ಕರಡಿಯ ದಾಳಿಗೆ ಈರಪ್ಪ , ಹೇಮವ್ವ , ಗೌತಮಿ, ಎಂಬುವವರು ಗಾಯಗೊಂಡಿದ್ದಾರೆ.
ಈ ಮೂವರು ನಾಗೇಶನಹಳ್ಳಿಯಿಂದ ಬೈಕ್ ನಲ್ಲಿ ತೋಟಕ್ಕೆ ಹೊರಟಿದ್ದಾಗ ಕರಡಿ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದೆ. ಇವರನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕನಕಗಿರಿ ತಾಲ್ಲೂಕಿನ ರಾಂಪುರ ಹತ್ತಿರ ಕರಡಿ ದಾಳಿಗೆ ವಯೋವೃದ್ದ ಚೆನ್ನಪ್ಪ (74) ಎಂಬುವವರು ಮೃತಪಟ್ಡಿದ್ದಾರೆ. ಗ್ರಾಮದ ಕೆರೆ ಹತ್ತಿರದ ಆಂಜನೇಯ ದೇವಸ್ಥಾನಕ್ಕೆ ಆಗಾಗ ಕರಡಿ ಬರುತ್ತಿದ್ದು ಹೀಗೆ ಬಂದ ಕರಡಿಯ ಮಾಹಿತಿ ಅರಣ್ಯ ಇಲಾಖೆಗೆ ತಿಳಿಸಿದ್ದು ಅರಣ್ಯ ಇಲಾಖೆಯವರು ಬರುವುದು ತಡವಾಗಿದೆ. ಅಲ್ಲಿಂದ ಹೊರ ಬಂದ ಕರಡಿ ವೃದ್ದ ಚೆನ್ನಪ್ಪ ಎಂಬುವವರ ಮೇಲೆ ದಾಳಿ ಮಾಡಿದೆ.
ಗಾಯಗೊಂಡ ಚೆನ್ನಪ್ಪ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.