Advt. 
 Views   581
Jul 26 2022 10:09PM

ಅವರಿಲ್ಲದ ನೋವು- ಅವರ ಕೃತಿ ಬಿಡುಗಡೆ ಖುಷಿ : ಇದೂ ನಮಗೆ ಸಮರಸ


ಕೊಪ್ಪಳ : ದಾಂಪತ್ಯ ಬದುಕಿನಲ್ಲಿ , ವೃತ್ತಿಯಲ್ಲಿ ಶಿಕ್ಷಕರಾಗಿ, ಪ್ರವೃತ್ತಿಯಲ್ಲಿ ಸಾಹಿತಿಗಳಾಗಿ ಜೊತೆಯಾಗಿ ಸಾಗಿದವರು ದಿ.ಗುರುಲಿಂಗಯ್ಯ ಹಿರೇಮಠ ಹಾಗೂ ದಿ.ಶ್ರೀಮತಿ ಶಾಂತಾದೇವಿ ಹಿರೇಮಠರವರು.

ದಂಪತಿಗಳು ರಚಿಸಿದ ಸಾಹಿತ್ಯ ಒಂದೇ ಕೃತಿಯಾಗಿ 'ಸಮರಸ' (ಕವನ ಸಂಕಲನ) ಹೆಸರಿನಲ್ಲಿ ಪ್ರಕಟವಾಗಿದ್ದು ಇದೇ ಜುಲೈ 31 ರಂದು ಬಿಡುಗಡೆಯಾಗಲಿದೆ. ದುಃಖ ಅಂದ್ರೆ ಸಮರಸ ಕವನ ಸಂಕಲನದ ಸಾಹಿತ್ಯಕ ದಂಪತಿಗಳು ಈಗ ಇಲ್ಲ ಎಂಬುದು.

'ಸಮರಸ' ಕೃತಿ ಬಗ್ಗೆ ಶಾಂತಾದೇವಿ ಅಮ್ಮರಿಗೆ ಬಹಳ ಕಾಳಜಿ, ನಿರೀಕ್ಷೆ ಇತ್ತು. ಕೃತಿಯ ಮುದ್ರಣದ ಓಡಾಟದ ಜವಾಬ್ದಾರಿಯನ್ನು ಅಕ್ಬರ್ ಕಾಲಿಮಿರ್ಚಿಯವರಿಗೆ ವಹಿಸಿದರು.

ಸಾಹಿತಿ ಈಶ್ವರ ಹತ್ತಿಯವರು ಮುನ್ನುಡಿ ಬರೆದರು.

ವಿಜಯಲಕ್ಷ್ಮೀ ಮೇಡಂ ಸಾಹಿತ್ಯ ಬಳಗ ಕೃತಿಯನ್ನು ಸಮಗ್ರ ಪರಿಶೀಲಿಸಿತು.

ಕೃತಿ ಸಿದ್ದವಾಗುವ ಹೊತ್ತಿಗೆ ಅಮ್ಮನವರಿಗೆ ಅನಾರೋಗ್ಯ ಕಾಡಿತು. ಸ್ವಲ್ಪ ಚೇತರಿಸಿಕೊಂಡರು ಆದ್ರೆ ಕೃತಿ ಬಿಡುಗಡೆ ಮುಂಚೆ ಹೊರಟು ಹೋದರು.

ದಂಪತಿಗಳ ತಲಾ 51 ಕವನಗಳು 'ಸಮರಸ' ಸಂಕಲನದಲ್ಲಿವೆ. ಜುಲೈ 31 ರವಿವಾರ ಬೆಳಗ್ಗೆ 10.30 ಕ್ಕೆ ಕೊಪ್ಪಳದ ತಾ.ಪಂ.ಸಭಾಂಗಣದಲ್ಲಿ ಸಂಕಲನ ಬಿಡುಗಡೆ ಇದೆ. 

ಸಾಹಿತಿ .ಎಂ.ಮದರಿ ಕವನ ಸಂಕಲನ ಬಿಡುಗಡೆಗೊಳಿಸುವರು.

ಕವನ ಸಂಕಲನ ಕುರಿತು ಮೊಳಕಾಲ್ಮೂರಿನ ಕವಿ ಜಬೀವುಲ್ಲಾ ಅಸದ್ ಮಾತನಾಡಲಿದ್ದಾರೆ.

ಹಿರಿಯ ಸಾಹಿತಿಗಳಾದ ಹೆಚ್. ಎಸ್. ಪಾಟೀಲರು ಅಧ್ಯಕ್ಷತೆ ವಹಿಸಲಿದ್ದಾರೆ.

ಅವರಿಲ್ಲ ಎಂಬ ನೋವು ಒಂದೆಡೆ
ಅವರ ಕೃತಿ ಬಿಡುಗಡೆ ಖುಷಿ ಇನ್ನೊಂದೆಡೆ. 
ಇದೂ ಕೂಡ ನಮ್ಮ ಪಾಲಿಗೆ 'ಸಮರಸ'



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


May 2 2024 7:59PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಜಿಲ್ಲಾಧಿಕಾರಿಗಳ ಪ್ರಕಟಣೆ
Apr 28 2024 8:45PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ತಂದೆ ಮಗ ಒಂದೇ ದಿನ ನಿಧನ
Apr 28 2024 8:14PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಸಂವಿಧಾನ ಪೀಠಿಕೆ ಓದುವುದರ ಮೂಲಕ ಮಾಂಗಲ್ಯಧಾರಣೆ
Apr 28 2024 7:39PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಾಂಗ್ರೆಸ್ ಸರಕಾರದ ಗ್ಯಾರಂಟಿಗಳು ಸಕ್ಸಸಫುಲ್ : ರಡ್ಡಿ ಶ್ರೀನಿವಾಸ
Apr 27 2024 7:25PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಗುಳದಳ್ಳಿಯಲ್ಲಿ ಸಾಮೂಹಿಕ ವಿವಾಹಗಳು
Apr 27 2024 9:38AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕುಷ್ಟಗಿ : ಭ್ರಷ್ಟಾಚಾರ ರಹಿತ ಆಡಳಿತ ನೀಡಿದ ಪಕ್ಷ ಬಿಜೆಪಿ
Apr 26 2024 9:11PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಮದುವೆಯಲ್ಲಿ ಮತದಾನ ಜಾಗೃತಿ
Apr 26 2024 7:08AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ
Apr 25 2024 12:06PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಮತದಾನಕ್ಕೆ ಮುನ್ನ ಅಜ್ಜಿ ನಿಧನ
Apr 25 2024 8:46AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಚಿನ್ಹೆಗಳು





     
Copyright © 2021 Agni Divya News. All Rights Reserved.
Designed & Developed by We Make Digitize