ಕೊಪ್ಪಳ : ದಾಂಪತ್ಯ ಬದುಕಿನಲ್ಲಿ , ವೃತ್ತಿಯಲ್ಲಿ ಶಿಕ್ಷಕರಾಗಿ, ಪ್ರವೃತ್ತಿಯಲ್ಲಿ ಸಾಹಿತಿಗಳಾಗಿ ಜೊತೆಯಾಗಿ ಸಾಗಿದವರು ದಿ.ಗುರುಲಿಂಗಯ್ಯ ಹಿರೇಮಠ ಹಾಗೂ ದಿ.ಶ್ರೀಮತಿ ಶಾಂತಾದೇವಿ ಹಿರೇಮಠರವರು.
ದಂಪತಿಗಳು ರಚಿಸಿದ ಸಾಹಿತ್ಯ ಒಂದೇ ಕೃತಿಯಾಗಿ 'ಸಮರಸ' (ಕವನ ಸಂಕಲನ) ಹೆಸರಿನಲ್ಲಿ ಪ್ರಕಟವಾಗಿದ್ದು ಇದೇ ಜುಲೈ 31 ರಂದು ಬಿಡುಗಡೆಯಾಗಲಿದೆ. ದುಃಖ ಅಂದ್ರೆ ಸಮರಸ ಕವನ ಸಂಕಲನದ ಸಾಹಿತ್ಯಕ ದಂಪತಿಗಳು ಈಗ ಇಲ್ಲ ಎಂಬುದು.
'ಸಮರಸ' ಕೃತಿ ಬಗ್ಗೆ ಶಾಂತಾದೇವಿ ಅಮ್ಮರಿಗೆ ಬಹಳ ಕಾಳಜಿ, ನಿರೀಕ್ಷೆ ಇತ್ತು. ಕೃತಿಯ ಮುದ್ರಣದ ಓಡಾಟದ ಜವಾಬ್ದಾರಿಯನ್ನು ಅಕ್ಬರ್ ಕಾಲಿಮಿರ್ಚಿಯವರಿಗೆ ವಹಿಸಿದರು.
ಸಾಹಿತಿ ಈಶ್ವರ ಹತ್ತಿಯವರು ಮುನ್ನುಡಿ ಬರೆದರು.
ವಿಜಯಲಕ್ಷ್ಮೀ ಮೇಡಂ ಸಾಹಿತ್ಯ ಬಳಗ ಕೃತಿಯನ್ನು ಸಮಗ್ರ ಪರಿಶೀಲಿಸಿತು.
ಕೃತಿ ಸಿದ್ದವಾಗುವ ಹೊತ್ತಿಗೆ ಅಮ್ಮನವರಿಗೆ ಅನಾರೋಗ್ಯ ಕಾಡಿತು. ಸ್ವಲ್ಪ ಚೇತರಿಸಿಕೊಂಡರು ಆದ್ರೆ ಕೃತಿ ಬಿಡುಗಡೆ ಮುಂಚೆ ಹೊರಟು ಹೋದರು.
ದಂಪತಿಗಳ ತಲಾ 51 ಕವನಗಳು 'ಸಮರಸ' ಸಂಕಲನದಲ್ಲಿವೆ. ಜುಲೈ 31 ರವಿವಾರ ಬೆಳಗ್ಗೆ 10.30 ಕ್ಕೆ ಕೊಪ್ಪಳದ ತಾ.ಪಂ.ಸಭಾಂಗಣದಲ್ಲಿ ಸಂಕಲನ ಬಿಡುಗಡೆ ಇದೆ.
ಸಾಹಿತಿ ಎ.ಎಂ.ಮದರಿ ಕವನ ಸಂಕಲನ ಬಿಡುಗಡೆಗೊಳಿಸುವರು.
ಕವನ ಸಂಕಲನ ಕುರಿತು ಮೊಳಕಾಲ್ಮೂರಿನ ಕವಿ ಜಬೀವುಲ್ಲಾ ಅಸದ್ ಮಾತನಾಡಲಿದ್ದಾರೆ.
ಹಿರಿಯ ಸಾಹಿತಿಗಳಾದ ಹೆಚ್. ಎಸ್. ಪಾಟೀಲರು ಅಧ್ಯಕ್ಷತೆ ವಹಿಸಲಿದ್ದಾರೆ.
ಅವರಿಲ್ಲ ಎಂಬ ನೋವು ಒಂದೆಡೆ
ಅವರ ಕೃತಿ ಬಿಡುಗಡೆ ಖುಷಿ ಇನ್ನೊಂದೆಡೆ.
ಇದೂ ಕೂಡ ನಮ್ಮ ಪಾಲಿಗೆ 'ಸಮರಸ'