ಕೊಪ್ಪಳದ ಶಿಕ್ಷಕ ಸಾಹಿತಿ ನಟನೆ ಮೂಲಕ ವಿವಿಧ ರಂಗಗಳಲ್ಲಿ ತೊಡಗಿಸಿಕೊಂಡಿರುವ ಸುರೇಶ ಕಂಬಳಿ ಮೊದಲ ಬಾರಿಗೆ 'ಕಾವೇರಿ' ಕಿರುಚಿತ್ರ ನಿರ್ದೇಶನ ಮಾಡಿದ್ದಾರೆ.
ನವೆಂಬರ್ 22 ರಂದು 'ಕಾವೇರಿ' ಟೀಸರ್ 'ಕರ್ಣ ಟಾಕಿಸ್' ಯುಟೂಬ್ ನಲ್ಲಿ ಬಿಡುಗಡೆಯಾಗಿದೆ.
ಶಿಕ್ಷಣದ ಬೆಳಕಿನಲ್ಲಿ ತನ್ನ ಬದುಕನ್ನು ಬೆಳಗಿಸಿಕೊಂಡು ಸಮಾಜಕ್ಕೆ ಸೇವೆಗೈಯುವ ಬಾಲಕಿಯ ಕನಸು ನನಸಾಯಿತೆ ? ಎಂಬುದು ಗೊತ್ತಾಗಲು ಕಾವೇರಿ ಕಿರುಚಿತ್ರ ನೋಡಬೇಕು. ಸಾಮಾಜಿಕ ಪಿಡುಗು, ತಾಯಿ ಸೆಂಟಿಮೆಂಟ್ ಎಲ್ಲವೂ ಒಳಗೊಂಡಂತೆ ಇದೆ ಕಿರುಚಿತ್ರ. ಇದೇ ನವೆಂಬರ್ 26 ರಂದು 'ಕಾವೇರಿ' ಕಿರುಚಿತ್ರ ಬಿಡುಗಡೆಯಾಗಲಿದೆ.
ವೃತ್ತಿ ಪ್ರವೃತ್ತಿ ಎರಡರ ಮೂಲಕವೂ ಉತ್ತಮ ಸಮಾಜದ ಆಶಯಗಳ ಚಿಂತನೆ ಇರುವ, ಅವುಗಳನ್ನು ಕಾರ್ಯರೂಪಕ್ಕೆ ತರಲು ಯತ್ನಿಸುವ ಸಿಪಿಐ ವಿಶ್ವನಾಥ ಹಿರೇಗೌಡರ ಈ ಚಿತ್ರಕ್ಕೆ ಮಾರ್ಗದರ್ಶನ ಮಾಡಿದ್ದು ಮಂಜುನಾಥಗೌಡ ಗೌಡ್ರ ನಿರ್ಮಾಣದ ಈ ಕಿರುಚಿತ್ರಕ್ಕೆ ಛಾಯಾಗ್ರಹಣ ಪುರುಷೋತ್ತಮ ಜೂಡಿ, ಸಂಗೀತ ಚಂದ್ರಶೇಖರ ಗೋಗಿ ಮಾಡಿದ್ದಾರೆ. ಕಥೆ ಚಿತ್ರಕಥೆ ಸಂಭಾಷಣೆ ನಿರ್ದೇಶನ ಸುರೇಶ ಕಂಬಳಿ ಮಾಡಿದ್ದಾರೆ.
ಗಬ್ಬೂರು, ಗಿಣಿಗೇರಿ ಕೆರೆಗಳನ್ನು ಅದರಷ್ಟು ಅದ್ಭುತವಾಗಿ ಸೆರೆ ಹಿಡಿದಿದ್ದಾರೋ ? ಈ ಕಿರುಚಿತ್ರಕ್ಕೂ ದ್ರೋಣ್ ಬಳಸಿದ್ದು ದಸ್ತಗಿರ ಆಪರೇಟ್ ಮಾಡಿದ್ದು ಕುತೂಹಲ ಮೂಡಿಸಿದೆ. ಶಿಕ್ಷಕ ಹನುಮಂತಪ್ಪ ಕುರಿ ಪ್ರಚಾರ ಜವಾಬ್ದಾರಿ ಹೊತ್ತಿದ್ದಾರೆ.
ಸ್ಪಂದನಾ, ಅರ್ಪಿತಾ, ರೇಣುಕಾ, ಕರಿಯಪ್ಪ ಕಂಬಳಿ, ರೇಣುಕಾ ದೇಸಾಯಿ, ಲಕ್ಷ್ಮಣ ಪೀರಗಾರ, ವೈಶಂಪಾಯನ, ಶುಭಕಿರಣ, ಶರಣು ಕೂಕನಪಳ್ಳಿ, ಸೋಮಲಿಂಗಪ್ಪ ಬೆಣ್ಣಿ ಈ ಕಿರುಚಿತ್ರದಲ್ಲಿ ನಟಿಸಿದ್ದಾರೆ.