Advt. 
 Views   664
Jan 30 2023 12:05AM

ದಿ. ಶಾಂತಾದೇವಿ ಹಿರೇಮಠ ಅವರ ಪ್ರಥಮ ಪುಣ್ಯಸ್ಮರಣೆ


ಅದೇನೋ ಅವ್ಯಕ್ತ ಆತಂಕ ಭಾವನೆಗಳು
ಕಣ್ಣರಿಯದಿದ್ದರೂ ಚುರುಗುಟ್ಟಿತು ಕರುಳು
ಮುಂಬರುವ ಸಂಕಟದ ಮುನ್ಸೂಚನೆಗಳು
ತಾಯಿಮಗಳ ಕರುಳಬಳ್ಳಿ ಕತ್ತರಿಸಬಹುದೆ ?

ಹೆತ್ತು ಹಾಲುಣಿಸದಿದ್ದರೂ ತುತ್ತಿಟ್ಟವಳು
ಹೊತ್ತು ಲಾಲಿಸದಿದ್ದರೂ ಹೊತ್ತಿಗಾದವಳು
ಮಧುರ ನೆನಪುಗಳ ಉಡಿ ತುಂಬಿದವಳು
ತಾಯಿಮಗಳ ಬಾಂಧವ್ಯಬಳ್ಳಿ ಬಾಡಬಹುದೆ ?

ಪುಟ್ಟ ಹೃದಯವನು ಜೇನಲದ್ದಿದವಳು
ದಿಟ್ಟತನದಿ ಬದುಕಿ  ದಿಕ್ಕು ತೋರಿದವಳು
ಅವರಿವರೆನ್ನದೆ  ಒಪ್ಪಿಅಪ್ಪಿದ ಗುಣದವಳು
ತಾಯಿಮಗಳ ಸ್ನೇಹದಬಳ್ಳಿ ಒಣಗಬಹುದೆ ?

ಕಾಲನಕರೆಯ ಮುನ್ನವೇ ಸ್ವಾಗತಿಸಿದವಳು
ದೇಹದಾನವ ಮಾಡಿ ಮಾದರಿಯಾದವಳು                             
ಅಕ್ಕರದಿ ಅಕ್ಷರಗಳನು ಉಸಿರಾಡಿದವಳು
ತಾಯಿಮಗಳ ಅರಿವಿನಬಳ್ಳಿ ಮುರಟಬಹುದೆ ?

ಸುಟ್ಟ ಬತ್ತಿಯನೇ ಮತ್ತೆಮತ್ತೆ ಹೊಸೆದವಳು
ತಾನುರಿದು ನಂದಾದೀಪವಾಗಿ ಬೆಳಗಿದವಳು
ಬಾಳಸಂಜೆಯ ಪಯಣದಿ ಶಾಂತವಾದವಳು
ತಾಯಿಮಗಳ ಪ್ರೀತಿಬಳ್ಳಿ ಮತ್ತೆ ಚಿಗುರದಿರಬಹುದೆ !

- ಶ್ರೀಮತಿ ವಿಜಯಲಕ್ಷ್ಮಿ ಕೊಟಗಿ

   ಮೊ :  9632240787.
( ದಿ. ಶಾಂತಾದೇವಿ ಹಿರೇಮಠರ ಪ್ರಥಮ ಪುಣ್ಯಸ್ಮರಣೆ ನಿಮಿತ್ಯ ನುಡಿನಮನ)



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


May 2 2024 7:59PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಜಿಲ್ಲಾಧಿಕಾರಿಗಳ ಪ್ರಕಟಣೆ
Apr 28 2024 8:45PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ತಂದೆ ಮಗ ಒಂದೇ ದಿನ ನಿಧನ
Apr 28 2024 8:14PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಸಂವಿಧಾನ ಪೀಠಿಕೆ ಓದುವುದರ ಮೂಲಕ ಮಾಂಗಲ್ಯಧಾರಣೆ
Apr 28 2024 7:39PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಾಂಗ್ರೆಸ್ ಸರಕಾರದ ಗ್ಯಾರಂಟಿಗಳು ಸಕ್ಸಸಫುಲ್ : ರಡ್ಡಿ ಶ್ರೀನಿವಾಸ
Apr 27 2024 7:25PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಗುಳದಳ್ಳಿಯಲ್ಲಿ ಸಾಮೂಹಿಕ ವಿವಾಹಗಳು
Apr 27 2024 9:38AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕುಷ್ಟಗಿ : ಭ್ರಷ್ಟಾಚಾರ ರಹಿತ ಆಡಳಿತ ನೀಡಿದ ಪಕ್ಷ ಬಿಜೆಪಿ
Apr 26 2024 9:11PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಮದುವೆಯಲ್ಲಿ ಮತದಾನ ಜಾಗೃತಿ
Apr 26 2024 7:08AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ
Apr 25 2024 12:06PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಮತದಾನಕ್ಕೆ ಮುನ್ನ ಅಜ್ಜಿ ನಿಧನ
Apr 25 2024 8:46AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಚಿನ್ಹೆಗಳು





     
Copyright © 2021 Agni Divya News. All Rights Reserved.
Designed & Developed by We Make Digitize